ಪೋಸ್ಟ್‌ಗಳು

ಸಂವಿಧಾನ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಭಾಗ 3 - ಮೂಲಭೂತ ಹಕ್ಕುಗಳು

ಭಾಗ 3 - ಮೂಲಭೂತ ಹಕ್ಕುಗಳು ಸಂವಿಧಾನದ 12 ನೇ ವಿಧಿಯಿಂದ 35 ನೇ ವಿಧಿಯವರೆಗೆ ಮೂಲಭೂತ ಹಕ್ಕುಗಳ ಬಗ್ಗೆ ಚರ್ಚಿಸಲಾಗಿದೆ. ಮೂಲಭೂತ ಹಕ್ಕುಗಳನ್ನು ಅಮೇರಿಕಾ ದಿಂದ ಎರವಲು ಪಡೆಯಲಾಗಿದೆ. ಮೂಲಭೂತ ಹಕ್ಕುಗಳನ್ನು ಭಾರತದ ಮ್ಯಾಗ್ನಾಕಾರ್ಟ್ ಎಂದು ಕರೆಯುವರು. ಮ್ಯಾಗ್ನಾಕಾರ್ಟ ಎಂಬುದು  ಪ್ರಪಂಚದಲ್ಲಿ ಮೊದಲ ಬಾರಿಗೆ 1215 ರಲ್ಲಿ ಇಂಗ್ಲೇಂಡಿನ ಅರಸ ಹೆನ್ರಿ ತನ್ನ ಪ್ರಜೆಗಳಿಗೆ ನೀಡಿದ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಕಾನೂನು ಆಗಿದೆ. ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ವ್ಯಕ್ತಿ ನೇರವಾಗಿ 32 ನೇ ವಿಧಿಯಡಿಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಇತರೇ ಹಕ್ಕುಗಳ ಉಲ್ಲಂಘನೆಯಾದಾಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಬರುವುದಿಲ್ಲ. ಆಗ 226 ನೇ ವಿಧಿಯಡಿಯಲ್ಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಮೂಲಭೂತ ಹಕ್ಕುಗಳಿಗೆ ನ್ಯಾಯಾಂಗದ ರಕ್ಷಣೆ ಯಿದ್ದು ಅವುಗಳ ಉಲ್ಲಂಘನೆ ಮಾಡಿದವರಿಗೆ ಸರ್ವೋಚ್ಚ ನ್ಯಾಯಾಲಯವು ಶಿಕ್ಷೆ ನೀಡುತ್ತದೆ. ಆದ್ದರಿಂದ ಸುಪ್ರೀಂಕೋರ್ಟ್ ಅನ್ನು ಮೂಲಭೂತ ಹಕ್ಕುಗಳ ರಕ್ಷಕ ನೆಂದು ಕರೆಯಲಾಗುತ್ತದೆ. 226 ನೇ ವಿಧಿಯಡಿಯಲ್ಲಿ ಹೈಕೋರ್ಟ್ ಸಹ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ. ಮೂಲಭೂತ ಹಕ್ಕುಗಳನ್ನು ಅನುಭವಿಸಲು ಎಷ್ಟೇ ಸ್ವಾತಂತ್ರ್ಯವಿದ್ದರೂ ಸಹ ಅವುಗಳನ್ನು ಅನುಭವಿಸಲು ಸಹ ಕೆಲವು ನಿರ್ಬಂಧಗಳಿವೆ ಆದ್ದರಿಂದ ಮೂಲಭೂತ ಹಕ್ಕುಗಳು ನಿರ್ಬಂಧಿತ ಹಕ್ಕು ಗಳಾಗಿವೆ. ಮೂ...

ಭಾಗ – 2 ಪೌರತ್ವ

ಭಾಗ – 2 ಪೌರತ್ವ ಸಂಸತ್ತು 1955 ರಲ್ಲಿ ಪೌರತ್ವ ಕಾಯ್ದೆ ಯನ್ನು ರೂಪಿಸಿತು.  ಭಾರತದಲ್ಲಿ 2  ರೀತಿಯ ಪೌರತ್ವಗಳಿವೆ. ಭಾರತೀಯ ನಿವಾಸಿಗಳಿಗೆ ಏಕ ಪೌರತ್ವ ಮತ್ತು ಅನಿವಾಸಿ ಭಾರತೀಯರಿಗೆ ದ್ವಿ ಪೌರತ್ವ. ಅಮೇರಿಕಾ ಮತ್ತು ಸ್ವಿಟ್ಜರ್ಲ್ಯಾಂಡ್ ದ್ವಿ ಪೌರತ್ವ ಹೊಂದಿರುವ ದೇಶಗಳಾಗಿವೆ. ವಿಧಿಗಳು ವಿಧಿ  5   – ಒಬ್ಬ ವ್ಯಕ್ತಿ ಭಾರತದಲ್ಲಿ ಹುಟ್ಟಿದ್ದರೆ , ವಾಸಿಸುತ್ತಿದ್ದರೆ ಅಥವಾ ಭಾರತದಲ್ಲಿ ಆ ವ್ಯಕ್ತಿಯ ತಂದೆ ತಾಯಿಗಳು ಹುಟ್ಟಿದ್ದರೆ ಆ ವ್ಯಕ್ತಿಯು ಸ್ವಾಭಾವಿಕವಾಗಿ ಭಾರತದ ಪೌರತ್ವ ಪಡೆಯುತ್ತಾನೆ. ವಿಧಿ  6  - ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ವ್ಯಕ್ತಿಗಳ ಪೌರತ್ವದ ಬಗ್ಗೆ ತಿಳಿಸುತ್ತದೆ. ವಿಧಿ  7  - ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋದ ವ್ಯಕ್ತಿಗಳ ಪೌರತ್ವದ ಬಗ್ಗೆ ತಿಳಿಸುತ್ತದೆ. ವಿಧಿ  8  - ಭಾರತದಿಂದ ಹೊರಗೆ ವಾಸಿಸುತ್ತಿರುವ ಭಾರತೀಯ  ನಾಗರಿಕರಲ್ಲದವರ ಪೌರತ್ವ ದ ಬಗ್ಗೆ ತಿಳಿಸುತ್ತದೆ. ವಿಧಿ  9   -  ಸ್ವ ಇಚ್ಚೆಯಿಂದ ಭಾರತದ ಪೌರತ್ವ ತೊರೆದವರು ಭಾರತದ ಪೌರರಲ್ಲ ಎಂಬುದನ್ನು ತಿಳಿಸುತ್ತದೆ. ವಿಧಿ  10  - ಭಾರತದ ಪೌರರಾಗಲು ಇರಬೇಕಾದ ಅರ್ಹತೆ ಗಳನ್ನು ನಿರ್ಧರಿಸುವ ಅಧಿಕಾರ ಸಂಸತ್ತಿಗಿರುತ್ತದೆ. ವಿಧಿ  11   – ವ್ಯಕ್ತಿ ಪೌರತ್ವ ವನ್ನು ಪಡೆಯುವ ಹಾಗೂ ಕಳೆದುಕೊಳ್ಳುವ ಕಾನ...

ಭಾಗ 1 - ರಾಜ್ಯಗಳ ಸಂಘ ಭಾರತ

ಇಮೇಜ್
ಭಾಗ 1 - ರಾಜ್ಯಗಳ ಸಂಘ ಭಾರತ ಭಾರತದ ಏಕೀಕರಣ ಭಾರತವು ಸ್ವಾತಂತ್ರ್ಯವಾದಾಗ ಒಟ್ಟು 562 ದೇಶೀಯ ಸಂಸ್ಥಾನಗಳಿದ್ದವು. ಸರ್ದಾರ್ ವಲ್ಲಭಬಾಯಿ ಪಟೇಲ್‍ರು ದೇಶೀಯ ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದರು ಹೀಗೆ ಒಕ್ಕೂಟಕ್ಕೆ ಸೇರಿದ ಮೊದಲ ಸಂಸ್ಥಾನ ಕೊಚ್ಚಿ. ಆದರೆ ಜುನಾಗಡ , ಹೈದರಾಬಾದ್ ಮತ್ತು ಕಾಶ್ಮೀರ ಸಂಸ್ಥಾನಗಳು ಭಾರತಕ್ಕೆ ಸೇರಲು ನಿರಾಕರಿಸಿದವು. ಹೈದರಾಬಾದ್ ನಿಜಾಮ ಒಸ್ಮಾನ್ ಅಲಿಖಾನ್ ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದಾಗ ಆಪರೇಷನ್ ಪೋಲೋ ಕಾರ್ಯಾಚರಣೆ ಮೂಲಕ ಪಟೇಲ್‍ರು 1947 ಸೆಪ್ಟೆಂಬರ್ 17 ರಂದು ಹೈದರಾಬಾದ್ ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಸೇರಿಸಿದರು. ಹಾಗಾಗಿ ಸೆಪ್ಟೆಂಬರ್ 17 ಅನ್ನು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ. ಕಾಶ್ಮೀರದ ಅರಸ ಹರಿಸಿಂಗ್ ಸ್ವತಂತ್ರವಾಗಿರಲು ಬಯಸಿದನಾದರೂ ಪಾಕಿಸ್ತಾನದ ಆಕ್ರಮಣದಿಂದ ಹೆದರಿ 1947 ಅಕ್ಟೋಬರ್ 26 ರಂದು ಭಾರತದ ಒಕ್ಕೂಟಕ್ಕೆ ಸೇರಿದನು. ಅಕ್ಟೋಬರ್ 26 ಅನ್ನು Accession Day ಎನ್ನುವರು. ಜುನಾಗಡವನ್ನು ಮತದಾನದ ಮೂಲಕ 1947 ನವೆಂಬರ್ 9 ರಂದು ಸೇರ್ಪಡೆ ಮಾಡಲಾಯಿತು. ಭಾಷಾವಾರು ಪ್ರಾಂತ್ಯಗಳ ರಚನೆ ಸ್ವಾತಂತ್ರ್ಯಾನಂತರ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ರಚಿಸಬೇಕೆಂಬ ಬೇಡಿಕೆಗಳು ಬಂದಾಗ 1946 ರಲ್ಲಿ ಧಾರ್ ಆಯೋಗ ರಚಿಸಲಾಯಿತು. ಆದರೆ ಧಾರ್ ಆಯೋಗ ಭಾಷಾವಾರು ಪ್ರಾಂತ್ಯಗಳ ರಚನೆಗಿಂತ ಆಡಳಿತಕ್ಕನುಕೂಲವಾಗಿ ಪ್...