ಪೋಸ್ಟ್‌ಗಳು

ಕರ್ನಾಟಕ ಏಕೀಕರಣ

ಇಮೇಜ್
ಕರ್ನಾಟಕ ಏಕೀಕರಣ ಭಾರತ ಸ್ವಾತಂತ್ರ್ಯವಾದಾಗ ಮೈಸೂರು ಪ್ರಾಂತ್ಯ ಅಸ್ತಿತ್ವದಲ್ಲಿತ್ತು. ಆಗಿನ್ನೂ ಕರ್ನಾಟಕ ಏಕೀಕರಣಗೊಂಡಿರಲಿಲ್ಲ. ಏಕೀಕರಣದ ಕಲ್ಪನೆಯನ್ನು ಮೊದಲಿಗೆ ಹಾಕಿಕೊಟ್ಟವರು ಡೆಪ್ಯುಟಿ ಚನ್ನಬಸಪ್ಪ ನವರು. 1856 ರಲ್ಲಿ ಧಾರವಾಡ ದಲ್ಲಿ ನಾರ್ಮಲ್ ಸ್ಕೂಲ್ ಪ್ರಾರಂಭವಾಯಿತು. ಇದರ ಉದ್ದೇಶ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ ಕರುನಾಡನ್ನು ಅಸ್ಥಿತ್ವಕ್ಕೆ ತರುವುದು. ಡೆಪ್ಯುಟಿ ಚೆನ್ನಬಸಪ್ಪ ನವರು ಇದರ ಮೊದಲ ಪ್ರಾಂಶುಪಾಲರಾಗಿದ್ದರು. ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮತ್ತೋರ್ವ ಮಹನೀಯರು ಆಲೂರು ವೆಂಕಟರಾಯರು . ಕರ್ನಾಟಕದ ಇತಿಹಾಸವನ್ನು ಕನ್ನಡಿಗರ ಎದುರಿಗೆ ತಂದು ಕನ್ನಡ ಭಾಷೆ , ಸಂಸ್ಕ ø ತಿ , ಜನಾಂಗಗಳನ್ನು ಒಳಗೊಂಡ ನೆಲದ ಏಕೀಕರಣದ ಮಹತ್ವವನ್ನು ತಿಳಿಸಿಕೊಡಲು 1910 ರಲ್ಲಿ ಕರ್ನಾಟಕ ಗತವೈಭವ ಎಂಬ ಕೃತಿಯನ್ನು ರಚಿಸಿದರು. ಏಕೀಕರಣಕ್ಕೂ ಮುನ್ನ ಇದ್ದ ಮೈಸೂರು ರಾಜ್ಯ ಮತ್ತು ಇತರ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಪ್ರದೇಶಗಳು ಮೈಸೂರು ಸಂಸ್ಥಾನ : ಬೆಂಗಳೂರು , ಚಿತ್ರದುರ್ಗ , ತುಮಕೂರು , ಮೈಸೂರು , ಕೋಲಾರ , ಶಿವಮೊಗ್ಗ , ಹಾಸನ , ಚಿಕ್ಕಮಗಳೂರು , ಮಂಡ್ಯ ಹೈದ್ರಾಬಾದ್ ಸಂಸ್ಥಾನ : ಬೀದರ್ , ಕಲುಬುರ್ಗಿ , ರಾಯಚೂರು ಮುಂಬೈ ಪ್ರಾಂತ್ಯ : ಧಾರವಾಡ , ಬಿಜಾಪುರ , ಬೆಳಗಾವಿ , ಉತ್ತರ ಕನ್ನಡ ಮದ್ರಾಸ್ ಪ್ರಾಂತ್ಯ : ನೀಲಗಿರಿ , ದಕ್ಷಿಣ ಕನ್ನಡ , ಬಳ್ಳಾರಿ ಕೊಡಗು : ಬ್ರಿಟೀಷ್...

ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ

ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ ಭಾರತೀಯ ಸ್ವಾತಂತ್ರ್ಯ ಚಳವಳಿಯ ಅಂಗವಾಗಿ ಕರ್ನಾಟಕ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಸ್ಥೂಲವಾಗಿ ಮೂರು ಕಾಲಗಳಾಗಿ ವಿಂಗಡಿಸಬಹುದಾಗಿದೆ. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ  ಮೊದಲನೆಯ ಘಟ್ಟ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟಗಳದ್ದು ಮೊದಲನೆಯ ಘಟ್ಟ. 1767 ರಿಂದ 1799 ರ ವರೆಗೆ ನಡೆದ 4 ಆಂಗ್ಲೋ ಮೈಸೂರು ಕದನಗಳಲ್ಲಿ ಹೈದರ್ ಅಲಿ ಮತ್ತು ಟೀಪೂ ಸುಲ್ತಾನ್ ಬ್ರಿಟಿಷರನ್ನು ಎದುರಿಸಿದರು. ಆದರೆ 1799 ರಲ್ಲಿ ನಡೆದ ಕೊನೆಯ ಆಂಗ್ಲೋ ಮೈಸೂರು ಕದನದಲ್ಲಿ ಟೀಪೂ ಸುಲ್ತಾನ್ ಸೋತು ಬ್ರಿಟಿಷರಿಂದ ಹತನಾದನು. ಸಶಸ್ತ್ರ ಬಂಡಾಯಗಳ ಎರಡನೆಯ ಘಟ್ಟ. 1800 - ದೋಂಡಿಯಾ ವಾಘ – ಮೈಸೂರು ಪ್ರಾಂತ್ಯ (ಕರ್ನಾಟಕದಲ್ಲಿ ಸಶಸ್ತ್ರ ಬಂಡಾಯವೆಬ್ಬಿಸಿದ ಮೊದಲ ಹೋರಾಟಗಾರ) , ಕೋಣಗಲ್ಲಿನಲ್ಲಿ ನಡೆದ ಕದನದಲ್ಲಿ ಬ್ರಿಟಿಷ್ ಸೇನಾನಿ ಆರ್ಥರ್ ವೆಲೆಸ್ಲಿಯಿಂದ ಧೋಂಡಿಯವಾಘ್ ಹತನಾದ. 1819 - ವೀರಪ್ಪನಾಯಕ - ಕೊಪ್ಪಳ 1820 - ಶಿವಲಿಂಗಯ್ಯ ದೇಶಮುಖ್ - ಬೀದರ್ 1824 - ದಿವಾಕರ ದೀಕ್ಷಿತ ಮತ್ತು ರಾವಜಿ ರಾಸ್ತೆ - ಸಿಂದಗಿ (ವಿಜಯಪುರ) 1824 – ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ – ಕಿತ್ತೂರು (ಬೆಳಗಾವಿ) – ದತ್ತು ಮಗನಿಗೆ ಹಕ್ಕಿಲ್ಲ ಎಂಬ ಬ್ರಿಟಿಷ್ ಸರ್ಕಾರದ ನೀತಿಗೆ ಪ್ರತಿಭಟನೆ. 1824 ಡಿಸೆಂಬರ್ 24 ರಂದು ಕಾಳಗ ನಡೆದು ಚೆನ್ನಮ್ಮ ಸೋತು ಶರಣಾದಳು. ಹ...

ಭಾರತೀಯ ಸ್ವಾತಂತ್ರ್ಯ ಹೋರಾಟ - ಗಾಂಧಿಯುಗ

ಇಮೇಜ್
ಭಾರತೀಯ ಸ್ವಾತಂತ್ರ್ಯ ಹೋರಾಟ ಗಾಂಧಿಯುಗ ( 1915-1947) ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ 1915 ರಲ್ಲಿ ಭಾರತಕ್ಕೆ ಹಿಂದಿರುಗಿದರು. ಗೋಪಾಲಕೃಷ್ಣ ಗೋಖಲೆ ಯವರು ಗಾಂಧಿಯವರ ರಾಜಕೀಯ ಗುರುವಾಗಿದ್ದರು. 1917 ರಲ್ಲಿ ಗಾಂಧೀಜಿ ಗುಜರಾತಿನ ಅಹ್ಮದಾಬಾದಿನಲ್ಲಿ ಸಾಬರಮತಿ ಆಶ್ರಮವನ್ನು ನಿರ್ಮಿಸಿದರು. ಯಂಗ್ ಇಂಡಿಯಾ ಇವರು ನಡೆಸುತ್ತಿದ್ದ ಪತ್ರಿಕೆಯಾಗಿತ್ತು. ಆತ್ಮಕತೆ ಮೈ ಎಕ್ಸ್ಪೆರಿಮೆಂಟ್ ವಿತ್ ದ ಟ್ರುತ್ (ನನ್ನ ಸತ್ಯಾನ್ವೇಷಣೆ) ಎಂಬುದು ಆತ್ಮಕತೆ. ಗಾಂಧಿಯವರನ್ನು ಸುಭಾಷ್ ಚಂದ್ರ ಭೋಸರು ರಾಷ್ಟ್ರಪಿತ ಎಂತಲೂ , ವಲ್ಲಭಬಾಯಿ ಪಟೇಲ್ ಅವರು ಬಾಪೂಜಿ ಎಂತಲೂ ಕರೆದಿರುವರು. ರವೀಂದ್ರನಾಥ ಠಾಗೂರರು ಗಾಂಧಿಯವರನ್ನು ಮಹಾತ್ಮ ಎಂದು ಕರೆದರೆ , ಗಾಂಧೀಜಿ ಠಾಗೂರರನ್ನು ಗುರುದೇವ ಎಂದು ಕರೆದಿದ್ದಾರೆ. ಬ್ರಿಟನ್ ಪ್ರಧಾನಿ ಸರ್ ವಿನ್ಸ್ಟನ್ ಚರ್ಚಿಲ್ ಗಾಂಧಿಯವರನ್ನು ಅರೆಬೆತ್ತಲೆ ಫಕೀರ ಎಂದು ಕರೆಯುತ್ತಿದ್ದರು. ಹೋಂ ರೂಲ್ ಚಳುವಳಿ ( 1916) ಅನಿಬೆಸೆಂಟರು ಸ್ವರಾಜ್ಯ ಸ್ಥಾಪನೆ , ಭಾಷಾವಾರು ಪ್ರಾಂತ್ಯಗಳ ರಚನೆ ಮತ್ತು ಭಾರತೀಯ ವೈದಿಕ ಶಿಕ್ಷಣದ ಜಾರಿ ಈ ಅಂಶಗಳನ್ನು ಜಾರಿಗೆ ತರುವುದಕ್ಕಾಗಿ ಹೋಂ ರೂಲ್ ಲೀಗ್ ಚಳುವಳಿಯನ್ನು ಪ್ರಾರಂಭಿಸುವ ಕುರಿತು 1914 ಜನವರಿ 2 ರಂದು ತಮ್ಮ ಕಾಮನ್ ವ್ಹೀಲ್ ಪತ್ರಿಕೆಯಲ್ಲಿ ಪ್ರಕಟಿಸಿದರು. 1916 ಏಪ್ರಿಲ್ ನಲ್ಲಿ ಬಾಲಗಂಗಾಧರ ತಿಲಕರು   ಬಾಂಬೆಯಲ್ಲಿ (ಮಹಾರಾಷ್ಟ್ರ) ಹೋಂ ರೂಲ್ ಚಳುವಳಿಯನ್...