ಭಾರತೀಯ ಸ್ವಾತಂತ್ರ್ಯ ಹೋರಾಟ
ಭಾರತೀಯ ಸ್ವಾತಂತ್ರ್ಯ ಹೋರಾಟ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (1885) 1857 ರ ಸ್ವಾತಂತ್ರ್ಯ ಸಂಗ್ರಾಮದಂತಹ ಘಟನೆ ಮತ್ತೇ ಮರಕುಳಿಸಬಾರದೆಂದು 1885 ರಲ್ಲಿ ಬ್ರಿಟಿಷ್ ಸರ್ಕಾರವು ಅಲೆನ್ ಆಕ್ಟೇವಿಯನ್ ಹ್ಯೂಮ್ ಅವರ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅನ್ನು ಸ್ಥಾಪಿಸಿತು. ಈ ಸಮಯದಲ್ಲಿ ಲಾರ್ಡ್ ಡಫರಿನ್ ವೈಸ್ರಾಯ್ ಆಗಿದ್ದರು. 1885 ಡಿಸೆಂಬರ್ 28 ರಂದು ಮುಂಬೈನ ಗೋಕುಲ್ ದಾಸ್ ತೇಜ್ಪಾಲ್ ಸಂಸ್ಕೃತ ವಿದ್ಯಾ ಆವರಣದಲ್ಲಿ ಕಾಂಗ್ರೆಸ್ ಪ್ರಥಮ ಸಭೆ ನಡೆಸಿತು. ಈ ಸಭೆಯಲ್ಲಿ 72 ಜನ ಭಾರತೀಯರು ಭಾಗವಹಿಸಿದ್ದರು. ಈ ಸಭೆಯ ಅಧ್ಯಕ್ಷತೆ ವಹಿಸಿಕೊಂಡವರು ಉಮೇಶ್ ಚಂದ್ರ ಬ್ಯಾನರ್ಜಿ . ಭಾರತದಲ್ಲಿ ಆಡಳಿತದ ಸುಧಾರಣೆ , ಭಾರತೀಯ ಗೃಹ ಕೈಗಾರಿಕೆಗಳ ವಸ್ತುಗಳಿಗೆ ಬೆಲೆ ಮತ್ತು ಬೇಡಿಕೆ ದೊರಕಿಸುವುದು , ಭಾರತೀಯರ ಮೇಲೆ ವಿಧಿಸಿದ ಅತಿಯಾದ ತೆರಿಗೆಗಳ ರದ್ಧು , ಭಾರತದಾಚೆ ಕೆಲಸ ಮಾಡುತ್ತಿರುವ ಕಾರ್ಮಿಕರ ರಕ್ಷಣೆ , ಭಾರತೀಯರಿಗೆ ಕ್ರಮೇಣವಾಗಿ ಜವಾಬ್ದಾರಿ ಸರ್ಕಾರವನ್ನು ನೀಡುವುದು ಮುಂತಾದ ಉದ್ದೇಶಗಳನ್ನು ಗಮನದಲ್ಲಿರಿಸಿಕೊಂಡು ಕಾಂಗ್ರೇಸ್ ಅನ್ನು ಸ್ಥಾಪಿಸಲಾಯಿತು. ಪಟ್ಟಾಭಿ ಸೀತಾರಾಮಯ್ಯ ನವರು ಕಾಂಗ್ರೆಸ್ ಅನ್ನು ಗೂಢತೆಯಲ್ಲಿ ಮುಸುಕಿರುವ ಅಂಶ ಎಂದು ಕರೆದಿದ್ದಾರೆ. ಲಾರ್ಡ್ ಕರ್ಜನ್ ಸಹ ಕಾಂಗ್ರೆಸ್ಸನ್ನು ಕೊಳಕು ವಸ್ತು ಎಂದಿದ್ದಾರೆ. ಪ್ರಮುಖ ಕಾಂಗ್ರೆಸ್ ಅಧಿವೇಶನಗಳು 1885 - ಮುಂಬೈ (ಮಹಾರಾಷ್ಟ್ರ)...